ಬದುಕುತ್ತೇನೆ ಗೆಳೆಯಾ
ನೀನಿಲ್ಲದೆಯೂ
ಬದುಕುತ್ತೇನೆ ನಾನು ನಾನಾಗಿ
ನಶ್ವರದ ಪಯಣದಲಿ
ಅಗಲುವಿಕೆ ಅನಿವಾರ್ಯತೆ
ಒಂಟಿತನ ಸಹಜ ತಾನೇ
ಅದೆಷ್ಟು ಸಿಹಿಯಾಗಿದ್ದೆ ಸಕ್ಕರೆಯಂತೆ
ಸವಿಯಾಗಿ ಮಾತನಾಡಿ
ಹೊಂಗನಸಿನಲಿ ತೇಲಾಡಿಸಿ
ಅಣುಅಣುವಿನಲ್ಲಿ ನೀನಾಗಿದ್ದೆ
ಅತಿಯಾದರೆ ಅಮೃತವೂ ವಿಷ
ಅರಿವಾದದ್ದು ನಿನ್ನಿಂದಲೇ
ವಾಮನನಂತಿದ್ದ ನೀನು
ದೇಹದ ಕಣಕಣಗಳನ್ನೆಲ್ಲಾ ವ್ಯಾಪಿಸಿ
ತ್ರಿವಿಕ್ರಮನಾಗಿ ಬೆಳೆದಾಗಲೇ
ನಿಜಸ್ವರೂಪದ ಅರಿವು
ಅಸ್ತಿತ್ವವನ್ನೇ ಬುಡಮೇಲು ಮಾಡಿ
ಪತನದತ್ತ ಹೆಜ್ಜೆ ಇರಿಸುತ್ತಿರುವ
ನಿನ್ನ ಬಿಡದೆ ಗತ್ಯಂತರವಿಲ್ಲ
ಗೆಳೆಯಾ ನಾನು ಬದುಕಬೇಕಲ್ಲ.
*****
Related Post
ಸಣ್ಣ ಕತೆ
-
ಏಕಾಂತದ ಆಲಾಪ
ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…
-
ತೊಳೆದ ಮುತ್ತು
ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…
-
ಅಜ್ಜಿಯ ಪ್ರೇಮ
ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…
-
ಬಿರುಕು
ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್ತಿ ಬೆಚ್ಚಿ… Read more…
-
ಎರಡು ಮದುವೆಗಳು
ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…